30,000 ಸಾವಿರ ನಗದು
ಬಹುಮಾನ ಪಡೆದ ಮಕ್ಕಳು
ಸತತ ಎರಡನೇ ಬಾರಿಗೆ
"ಕರ್ನಾಟಕ ಚಾಂಪಿಯನ್ಸ್" ಪಟ್ಟ
ಗುಲ್ಬರ್ಗದಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆ, ರಾಜ್ಯ ಪ್ರಾಕ್ತನ ಇಲಾಖೆ ವತಿಯಿಂದ ನಡೆದ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಹೊಸೂರು-ಗುಡ್ಡೇಕೇರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಭರತ್ ಬಿರಾದರ್ ಮತ್ತು ಸೃಷ್ಟಿ ಕೆ.ಎಸ್. ಪ್ರಥಮ ಸ್ಥಾನ ಪಡೆಯುವ ಮೂಲಕ ಸತತ ಎರಡನೇ ಬಾರಿಗೆ ಕರ್ನಾಟಕ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ತಲಾ 15 ಸಾವಿರದಂತೆ 30 ಸಾವಿರ ಬಹುಮಾನ ಪಡೆದಿದ್ದಾರೆ.
ರಾಜ್ಯ ಉತ್ತಮ ಶಿಕ್ಷಕ
ಪ್ರಶಸ್ತಿ ಪುರಸ್ಕೃತರಾದ ವೀರೇಶ್ ತರಬೇತಿಯಲ್ಲಿ ಮಕ್ಕಳು ಸಾಧನೆ ಮಾಡಿದ್ದಾರೆ. ಮಕ್ಕಳ ಈ ಸಾಧನೆಗೆ
ಎಸ್.ಡಿ.ಎಂ.ಸಿ., ಪೋಷಕರು, ಸಹ ಶಿಕ್ಷಕರು, ದಾನಿಗಳು, ಹಿರಿಯ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ
ಎಂದು ಮುಖ್ಯ ಶಿಕ್ಷಕ ಮಂಜುಬಾಬು ತಿಳಿಸಿದ್ದಾರೆ.
