ರಾಜ್ಯ ಕಾಂಗ್ರೆಸ್
ಸರ್ಕಾರದ ಬಳಿ ಗುದ್ದಲಿಪೂಜೆಗೂ ಹಣವಿಲ್ಲ – ಡಾ.ಧನಂಜಯ ಸರ್ಜಿ
ತಾಲ್ಲೂಕು, ಜಿಲ್ಲಾ
ಪಂಚಾಯಿತಿ ಚುನಾವಣೆ ಶೀಘ್ರ - ಆರಗ
ಸ್ಥಳೀಯ ಸಂಪನ್ಮೂಲ
ಬಳಸಿಕೊಂಡು ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸುವ ಜೊತೆಗೆ ಉದ್ಯಮಶೀಲತೆ ವೃದ್ಧಿ ಮಾಡುತ್ತೇನೆ. ಭಾರತದಲ್ಲಿ
ಮಾನವ ಸಂಪನ್ಮೂಲ ಯಥೇಚ್ಚವಾಗಿದೆ. ಕೇಂದ್ರ ಸರ್ಕಾರ ರೈಲ್ವೆ, ವಿಮಾನ, ರಸ್ತೆ ಸಂಪರ್ಕದ ಜೊತೆಗೆ ಶಿಕ್ಷಣ,
ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಪ್ರಧಾನಿ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು
ಕಿರು ಉದ್ದಿಮೆಗಳಿಗೆ ಉತ್ತಮ ಅವಕಾಶ ಲಭಿಸಿದೆ ಎಂದು ನೈರುತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ಡಾ. ಧನಂಜಯ ಸರ್ಜಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಕ್ಷೇತ್ರದಲ್ಲಿ ಕೃಷಿ
ಆದಾಯ ಶೇ.25, ಕೈಗಾರಿಕೆ ಶೇ.25, ಸೇವಾ ವಲಯ ಶೇಕಡಾ 50 ರಷ್ಟು ಕೊಡುಗೆ ನೀಡುತ್ತಿದೆ. ಇದು ಜಿಲ್ಲಾ
ನೇರ ಆದಾಯವಾಗಿದ್ದು ಅಭಿವೃದ್ಧಿಗೆ ಪೂರಕ ವಾತಾವರಣ ಇದೆ. ವಿಶ್ವದ ಉನ್ನತ ಕಂಪನಿಗಳು ಭಾರತದಲ್ಲಿ ಹೂಡಿಕೆ
ಮಾಡಲು ಸಿದ್ಧವಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರದ ಬಳಿ ಗುದ್ದಲಿಪೂಜೆಗೂ ಹಣವಿಲ್ಲ ಎಂದು ಟೀಕಿಸಿದರು.
ಸರ್ಕಾರಿ ನೌಕರರ
ಕ್ಷೇಮಕ್ಕಾಗಿ ಹಳೆ ಪಿಂಚಣಿ ಯೋಜನೆ ಜಾರಿಗೆ ಸರ್ಕಾರವನ್ನು ಒತ್ತಾಯಿಸುತ್ತೇನೆ. 7ನೇ ವೇತನ ಆಯೋಗ ವರದಿ
ಜಾರಿಗೆ ಶ್ರಮಿಸುತ್ತೇನೆ. ಕೊಡುಗು ಜಿಲ್ಲೆಯಲ್ಲಿ ರಕ್ಷಣಾ ತರಬೇತಿ ಸಂಸ್ಥೆ ಸ್ಥಾಪನೆ ಉದ್ದೇಶ ಹೊಂದಿದ್ದೇನೆ.
ಶಾಸಕರಿಗೆ ವಿಕಾಶ ಶಾಲಾ ಕೊಠಡಿ ನಿರ್ಮಾಣದ ಹಣವನ್ನು ಜಾರಿಗೊಳಿಸಿತ್ತು. ಕಾಂಗ್ರೆಸ್ ಸರ್ಕಾರ ಎಸ್ಇಪಿ
ಜಾರಿಗೊಳಿಸಿ ವಿದ್ಯಾರ್ಥಿಗಳ ಭವಿಷ್ಯ ಕಿತ್ತುಕೊಳ್ಳುತ್ತಿದೆ ಎಂದು ದೂರಿದರು.
ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ಮೀಸಲಾತಿ, ಕ್ಷೇತ್ರ ವಿಂಗಡಣೆ ಗೊಂದಲ ನ್ಯಾಯಾಲಯದ ಮೆಟ್ಟಿಲೇರಿತ್ತು. ಹಾಗಾಗಿ ಮೂರುವರೆ ವರ್ಷಗಳ ಕಾಲ ಚುನಾವಣೆ ನಡೆದಿರಲಿಲ್ಲ. ಇದ್ದ ತೊಡಕು ನಿವಾರಣೆಯಾಗಿದ್ದು ಹಾಲಿ ಚುನಾವಣೆ ಫಲಿತಾಂಶದ ಬಳಿಕ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಒತ್ತಾಯಿಸಲಾಗುವುದು. – ಆರಗ ಜ್ಞಾನೇಂದ್ರ
ಪತ್ರಿಕಾಗೋಷ್ಟಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ, ತಾಲ್ಲೂಕು ಬಿಜೆಪಿ ಅಧ್ಯಕ್ಷ ನವೀನ್ ಹೆದ್ದೂರು, ಜೆಡಿಎಸ್ ಅಧ್ಯಕ್ಷ ಕುಣಜೆ ಕಿರಣ್, ಮುಖಂಡರಾದ ನಾಗರಾಜ ಶೆಟ್ಟಿ, ಬಾಳೇಬೈಲು ರಾಘವೇಂದ್ರ, ಚಂದುವಳ್ಳಿ ಸೋಮಶೇಖರ್ ಇದ್ದರು.