ತೀರ್ಥಹಳ್ಳಿ ಪಟ್ಟಣದ ಮಾರಿಕಾಂಬಾ ದೇವಸ್ಥಾನದ ಪಕ್ಕದಲ್ಲಿರುವ ಕಲ್ಪವೃಕ್ಷ ಪತ್ತಿನ ಸಹಕಾರ ಸಂಘ ವಾರ್ಷಿಕ 3.28 ಕೋಟಿ ವ್ಯವಹಾರ ನಡೆಸಿ 11 ಲಕ್ಷಕ್ಕೂ ಹೆಚ್ಚಿನ ಮೊತ್ತದ ಲಾಭಗಳಿಸಿದೆ. ಒಟ್ಟಾರೆ 475 ಷೇರುದಾರ ಸದಸ್ಯರಿಗೆ 2.94 ಕೋಟಿ ಜಾಮೀನು ಹಾಗೂ ಸ್ಥಿರಾಸ್ಥಿ, ಅಡಮಾನ ಸಾಲವನ್ನು ನೀಡಿದ್ದು ಮಾರ್ಚ್ ಅಂತ್ಯಕ್ಕೆ 96% ವಸೂಲಿಯಾಗಿದೆ. ದಶಮಾನೋತ್ಸವ ಸಂದರ್ಭದಲ್ಲಿ ಪಟ್ಟಣದಲ್ಲಿ ಸಂಘವು ಸ್ವಂತ ನಿವೇಶನ ಖರೀದಿಸಲು ಮುಂದಾಗಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಎಂದು ಸಂಘದ ಅಧ್ಯಕ್ಷ ಇ.ವಿ.ಶ್ರೀಧರಮೂರ್ತಿ ತಿಳಿಸಿದರು.
ಸರ್ವ ಸದಸ್ಯರ ಸಭೆ ಸೆಪ್ಟೆಂಬರ್ 10ರ ಗುರುವಾರ ಇಲ್ಲಿನ ಬಂಟರ ಭವನದಲ್ಲಿ ಬೆಳಿಗ್ಗೆ 10.30ಕ್ಕೆ
ಏರ್ಪಡಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಪಿಕಾರ್ಡ್
ಬ್ಯಾಂಕ್ ಅಧ್ಯಕ್ಷ ಬಸವಾನಿ ವಿಜಯದೇವ್ ಭಾಗವಹಿಸಲಿದ್ದಾರೆ. ಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ
ಟಿ.ವಿ.ರಾಮಚಂದ್ರ ಅವರನ್ನು ಗೌರವಿಸಲಾಗುತ್ತದೆ ಎಂದರು.
ಉಪಾಧ್ಯಕ್ಷ ಚಿಡುವ ಮಂಜುನಾಥ, ಸದಸ್ಯರಾದ ಈಶ್ವರ ನಾಯ್ಕ, ವಿಶಾಲ್ ಕುಮಾರ್, ಕೆ.ಎಸ್.ಮೂರ್ತಿ,
ವಳಗೆರೆ ಶ್ರೀನಿವಾಸ್, ಎಂ.ದಿನೇಶ್, ಬಿ.ಎಸ್.ಸುಬ್ರಹ್ಮಣ್ಯ, ಕೆ.ಎಲ್.ಪುಟ್ಟಸ್ವಾಮಿ, ಕೆ.ಸಿ.ರೂಪ,
ಬಿ.ಎಸ್.ಅನಿತ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಣಿ, ಸಹಾಯಕಿ ಶ್ರೇಯ ಮತ್ತಿತರರು ಇದ್ದರು.
