ಹೆಬ್ರಿಯ ಎಸ್.ಆರ್.ಪಿ.ಯು ಕಾಲೇಜಿನ ವಾಣಿಜ್ಯ ವಿಭಾಗದ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿರುವ ಪ್ರಾಣದೀಪ್ ಟಿ. ಯು 600 ಅಂಕಗಳಿಗೆ 593 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 8ನೇ ರ್ಯಾಂಕ್ ಪಡೆದಿದ್ದಾನೆ. ಪ್ರಾಣದೀಪ್ ಉಮೇಶ್ ಕಂಪ್ಯೂಟರ್ಸ್ ಮಾಲೀಕರಾದ ಉಮೇಶ್ ಬಿ.ಆರ್., ಮಮತಾ ಬಿ.ಎಸ್. ದಂಪತಿಗಳ ದ್ವಿತೀಯ ಪುತ್ರ.
ಕುಂದಾಪುರದ ಎಕ್ಸಲೆಂಟ್
ಕಾಲೇಜು ಸುಣ್ಣಾರಿಯ ವಿಜ್ಞಾನ ವಿಭಾಗದಲ್ಲಿ ಕುರುವಳ್ಳಿಯ ಆರ್ಯನ್ ಶೇಕಡಾ 96 ಪಡೆದು ಉತ್ತಮ ಸಾಧನೆ
ಮಾಡಿದ್ದಾನೆ. ವಾಲಿಬಾಲ್ ಕ್ರೀಡೆಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಈಗಾಗಲೇ ಆಡಿರುವ ಆರ್ಯನ್
ಕುರುವಳ್ಳಿಯ ಅನಿಲ್ ಹೆಚ್.ಪಿ. ಹಾಗೂ ರಮ್ಯ ದಂಪತಿಯ ಪುತ್ರ.
