ತೇಲಿ ಬಂತು ಚಿನ್ನದ ರಥ
ಅಸಲಿ ಚಂಡಮಾರುತದ ಅಬ್ಬರಕ್ಕೆ ಆಂಧ್ರಪ್ರದೇಶದಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಈ ನಡುವೆ ಸಮುದ್ರದಲ್ಲಿ ಚಿನ್ನದ ರಥವೊಂದು ಕಡಲಲ್ಲಿ ತೇಲಿ ಬಂದ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಸುನ್ನಪಲ್ಲಿ ಗ್ರಾಮದಲ್ಲಿ ನಡೆದಿದೆ.ಕರಾವಳಿ ಕಡಲಲ್ಲಿ ತೇಲಿ ಬಂದ ಬಂಗಾರದ ಬಣ್ಣದ ರಥ ಕಂಡು ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ಚಂಡಮಾರುತದ ಅಬ್ಬರಕ್ಕೆ ಸಮುದ್ರದಲ್ಲಿ ಬೃಹತ್ ಗಾತ್ರದ ಅಲೆಗಳು ಹೇಳುತ್ತಿದ್ದು ಚಂಡಮಾರುತದ ಹೊಡೆತಕ್ಕೆ ಸಿಲುಕಿ ಥೈಲಂಡ್, ಮೈನ್ಮಾರ್ ಅಥವಾ ದಕ್ಷಿಣಾಭಿಮುಖವಾಗಿರುವ ಪೂರ್ವ ದೇಶಗಳಿಂದ ಸಮುದ್ರದಲ್ಲಿ ತೇಲಿ ಬಂದಿರಬಹುದು ಎಂದು ಹೇಳಲಾಗುತ್ತಿದೆ.
ಸ್ಥಳೀಯ ಮೀನುಗಾರರು ರಥಕ್ಕೆ ಹಗ್ಗಕಟ್ಟಿ ರಥವನ್ನ ಸಮುದ್ರದಿಂದ ತಂದಿದ್ದಾರೆ. ಸಮೀಪವಿರುವ ಯಾವುದಾದರೂ ದೇಶದಿಂದ ಬಂದಿರಬಹುದು. ಮಲೇಶಿಯಾ, ಇಂಡೋನೇಶಿಯಾ ಸಮುದ್ರದಲ್ಲಿ ಕೊಚ್ಚಿಕೊಂಡು ಬಂದಿರಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದು, ಗುಪ್ತಚರ ಇಲಾಖೆಗೆ ಮಾಹಿತಿ ತಿಳಿಸಿರುವುದಾಗಿ ಆಧ್ರಪ್ರದೇಶದ ಪೊಲೀಸರು ತಿಳಿಸಿದ್ದಾರೆ.
Tags:
ಚಿನ್ನದ ರಥ

