ಶಿವಮೊಗ್ಗ
ಗಾಂಧಿಬಜಾರ್ ಗಿರೀಶ್ ನಿಧನ
ಮಂಡಗದ್ದೆ
ಸಮೀಪದ 15ನೇ ಮೈಲಿಕಲ್ಲಿನಲ್ಲಿ ಘಟನೆ
ಶಿವಮೊಗ್ಗ
- ತೀರ್ಥಹಳ್ಳಿ ಮಾರ್ಗ ಮಧ್ಯೆಯ 15ನೇ ಮೈಲಿಕಲ್ಲು ಸಮೀಪ ಶಿವಮೊಗ್ಗ ಗಾಂಧಿ ಬಜಾರ್ 4ನೇ ತಿರುವಿನ
ವಾಸಿ ಗಿರೀಶ್ (30) ಬುಧವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಿರೀಶ್ ಮಂಡಗದ್ದೆ ಹೋಟೆಲ್ನಲ್ಲಿ
ಊಟ ಮಾಡಿ ವಾಪಾಸ್ಸು ತೆರಳುವಾಗ ರಾಷ್ಟ್ರೀಯ ಹೆದ್ದಾರಿ 169ರ ಮಾರ್ಗ ಘಟನೆ ಸಂಭವಿಸಿದೆ.
15ನೇ ಮೈಲಿಕಲ್ಲು ಸಮೀಪ ಖಾಸಗಿ ಬಸ್ ಕಂಡ ಹೇಮಂತ್ ಗಲಿಬಿಲಿಗೊಂಡಿದ್ದಾರೆ. ಬಸ್ ಮೈಮೇಲೆ ಅಪ್ಪಳಿಸಬಹದು ಎಂಬ ಭಯದಲ್ಲಿ ಬೈಕಿನಿಂದ ಕೆಳಗೆ ಬಿದ್ದು ತೊಡೆಗೆ ತೀವ್ರ ಪೆಟ್ಟಾಗಿ ಮೃತಪಟ್ಟಿದ್ದಾರೆ. ಗಿರೀಶ್ ಶಿವಮೊಗ್ಗದಲ್ಲಿ ಜಿಮ್ ನಡೆಸಿಕೊಂಡಿದ್ದರು ಎಂದು ತಿಳಿದುಬಂದಿದೆ. ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.